Pages

Tuesday, December 31, 2013

ಜೋಚುಟುಕುಗಳು - ೪

ಜನವರಿ ಒಂದು
ಕುಣಿದು ಕುಪ್ಪಳಿಸದಿರಿ ಹಾದಿ ಬೀದಿಯಲಿ ಹೊಸ(?) ವರುಷದಿ
ಸೇವಿಸದಿರಿ ಮದ್ಯ ಮಾಂಸ ಕೇಕು ಪಿಜ್ಜಾ ಮಧ್ಯರಾತ್ರಿಯಲಿ
ಪಾಶ್ಚಿಮಾತ್ಯರ ಹೊಸವರ್ಷಕ್ಕಿಲ್ಲ ಯಾವುದೇ ತಳಹದಿ
ಉಳಿಸಿ ಬೆಳೆಸಿ ಭಾರತೀಯ ಸಂಸ್ಕೃತಿಯ ಸದಾಕಾಲದಲಿ
ಭಾರತೀಯರಿಗೆಲ್ಲ ಹೊಸವರ್ಷದ ಆರಂಭ ಯುಗಾದಿ

ತಾಮಸ ಕಾಲದಲ್ಲಿ ಯಾವುದೇ ಆರಂಭವಿಲ್ಲ ತಿಳಿದಿರಲಿ
ಅರುಣೋದಯಕ್ಕೆ ದಿನದ ಬದಲಾವಣೆ ನೆನಪಿರಲಿ
ಬಿಟ್ಟು ಹೋಗಬೇಡಿ ಹಿರಿಯರು ಹಾಕಿಕೊಟ್ಟ ಹಾದಿ
ನೀವಾಗಬೇಡಿ ಈ ಆಚರಣೆ ವಿರೋಧಿಗೆ ಪ್ರತಿವಾದಿ
ಪಂಚ್: ರಾತ್ರಿ ಆರಾಮಾಗಿ ಮಲಗಿ ಸಿಹಿಗನಸಿನಲಿ ತೇಲಿ 

ಶಾಸಕರ ವಿದೇಶ ಪ್ರವಾಸ
ಬಡಿದಿದೆ ಬರ ೯೦ಕ್ಕೂ ಹೆಚ್ಚು ತಾಲ್ಲೂಕುಗಳಿಗೆ
ಪ್ರಯಾಣ ಹೊರಟಿದ್ದಾರೆ ನಮ್ಮ ಶಾಸಕರು ವಿದೇಶಗಳಿಗೆ
ಕಿವಿಗೊಡದೆ ರಾಜ್ಯಪಾಲರ ಮಾತುಗಳಿಗೆ
ಅವರ್ಯಾಕೆ ತೆರಳಬಾರದು ಸ್ವಕ್ಷೇತ್ರಗಳಿಗೆ
ಸ್ಪಂದಿಸಬಾರದು ಜನರ ನೋವು ನಲಿವುಗಳಿಗೆ
ಬರದೇ ಸರಿಯಾದ ಬುದ್ದಿ ನಮ್ಮ ಜನಗಳಿಗೆ
ಓಟು ಕೊಟ್ಟರೆ ಇಂತಾ ಖದೀಮರುಗಳಿಗೆ
ಮತ್ತೂ ತುಂಬುವುದು ತೆರಿಗೆ ಹಣ ಅವರ ಜೇಬುಗಳಿಗೆ
ಪಂಚ್: 'ಕೈ'ಲಿದ್ದರೆ ಅಧಿಕಾರದ ಚುಕ್ಕಾಣಿ, ಖಜಾನೆ ಖಾಲಿಯಾಗಿ ತುಂಬುವುದು 'ಕೈ'ಯಲ್ಲಿರುವ ಜೋಳಿಗೆ!

ನ ಮೋ
ಕೋರ್ಟು ನೀಡಿದೆ ಮೋದಿಗೆ ಕ್ಲೀನ್ Chit
ಕೋಮು ಗಲಭೆ ದೋಷಾರೋಪಣೆಗಳಿಂದ ಮೋದಿ Exit
ಜಾಕಿಯ ಮತ್ತೆ ಸಲ್ಲಿಸಲಿದ್ದಾರಂತೆ Affidavit
ಇದರಿಂದಾಯಿತು ಮೋದಿ ಜನಪ್ರಿಯತೆ ಮತ್ತಷ್ಟು Hit
ಮೋದಿ ನಿರಪರಾಧಿಯೆಂದು ಕಾಂಗ್ರೆಸ್ ಮಾಡಿಕೊಳ್ಳಲಿ Admit

ಮೋದಿ ದ್ವೇಷಿಗಳು ಗುಜರಾತ್ ಗೆ ನೀಡಿ Visit
ಮತ್ತೂ ನಡೆಸಿರಿ ಯಾವುದೇ ಸರ್ಕಾರಿ ಕಚೇರಿ Audit
ಮೋದಿ ಮಾಡಿಸಿಲ್ಲ ಸರ್ಕಾರಿ ಪತ್ರಗಳ Edit
ಪಂಚ್: ಮೋದಿಯೊಬ್ಬರೆ ಪ್ರಧಾನಮಂತ್ರಿ ಪದವಿಗೆ Fit
*******

Saturday, December 28, 2013

ವಂದ ನಗಳು


ವಂದ (ವಂದನ)ಳೊಂದಿಗೆ ಹತ್ತಿದ್ದೆ ಬಸ್ಸು, ಊರಿಗೆ ಹೋಗಲು
ನೊಂದಜೀವಿಯಾಗಿದ್ದ ಅವಳು ಬಹಳ ಬೇಸರಿಸಿಕೊಂಡಿದ್ದಳು
ಮಾತಾದಡಿಸಿದಷ್ಟು  ಹೆಚ್ಚಾಗಿತ್ತು ಬಿಕ್ಕಿನ ಅಳು
ಕೇಳಿ ಸಾಕಾಗಿತ್ತು ನನಗೂ ಅವಳ ಗೋಳು
ಒಮ್ಮೆ ನಗಿಸಿದರೆ ಚೂರು ಸರಿಹೋದಾಳು -
ಎಂದೆಣಿಸಿ ತಡಕಾಡಿದೆ, ಜೋಕೊಂದು ಹೇಳಲು
ಆಗ ಕಂಡಿದ್ದೆ ರಾಜಹಂಸದಲ್ಲಿ ಬರೆದಿದ್ದ "ವಂದನಗಳು"
ಅದ ತೋರಿಸಿದಾಗ ಅವಳು ನಿಜವಾಗಿ ನಕ್ಕಳು

ಪಂಚ್ : ಅತ್ತ ಕನ್ನಡದ ಕೊಲೆ
            ಇತ್ತ ನಗುವಿನ ಅಲೆ
ನನಗಾಗಿತ್ತು ಸಂಕಟ ಸಂತೋಷ ಒಮ್ಮೆಲೆ
*******

Wednesday, December 25, 2013

ದೆಹಲಿ ರಾಜಕೀಯ


ಅಂದು: ಡಿ. ೦೮, ೨೦೧೩
'ಹರ್ಷ' ವರ್ಧಿಸಿದರೂ ಪೂರ್ತಿಯಾಗಿ ಅರಳದ ಕಮಲ
ತೊಳೆದರೂ ಪೂರ್ತಿ ಅಂಟು (ಎಂಟು!) ಹೋಗದ 'ಕೈ'ಗಂಟಿದ್ದ ಮಲ
'ಪೊರಕೆ'ಗಳು ಸಾಕಾಗಲ್ಲಿಲ್ಲ ಸ್ವಚ್ಛಗೊಳಿಸಲು ರಾಜಧಾನಿಯ ನೆಲ
ಕೈ, ಕಮಲದ ಹಂಗು ಬೇಡೆಂದ ಕೇಜ್ರೀವಾಲ!

ಇಂದು: ಡಿ. ೨೫, ೨೦೧೩
ದೆಹಲಿಯಲ್ಲಿ ವಾತಾವರಣ ಆಗಿತ್ತು ಬಹಳ ಶೀತಲ
ಅಧಿಕಾರದ ಬಿಸಿ ಏರಿಸಿಕೊಳ್ಳಲು AAP ಕೆಡಿಸಿಕೊಂಡಿತು ತನ್ನ ಕುಲ
'ಕೈ'ಯಲ್ಲಿ ಪೊರಕೆ ಹಿಡಿಸಲು ಸಫಲಳಾದಳು ಗೋಮುಖದ 'ಶೀಲ'
ಸಿದ್ದಗೊಳ್ಳುತ್ತಿದೆ 'ಅರವಿಂದ'ನ ಪ್ರಮಾಣಕ್ಕೆ ರಾಮ'ಲೀಲ'

ಪಂಚ್: ಮತದಾರರೇ
ಹೋಗಲಾಡಿಸಿ ನಿಮ್ಮ ಚಿತ್ತ ಚಂಚಲ
AAPಗೆ ಮತ ನೀಡಬೇಡಿ ಬರುವ ಸಲ (ಲೋಕಸಭೆ ಚುನಾವಣೆ)
ಎಲ್ಲೆಲ್ಲೂ ಅರಳಲಿ (Mission 272+) ಕಮಲ
'Modi'fy ಆದಾಗ ಭಾರತವಾಗುವುದು ಕೋಮಲ!
******* 

Tuesday, December 24, 2013

ಜೋಚುಟುಕುಗಳು - ೩


ಮೊಬೈಲ್ ಬಿಲ್ಲು

ಬಾರಿಸಿತ್ತು ನಮ್ಮ -
ಮನೆ ಕಾಲಿಂಗ್ ಬೆಲ್ಲು
ಬಂತು ಇವಳ ಮೊದಲ -
ಮೊಬೈಲ್ ಬಿಲ್ಲು
ತುಂಬಿತ್ತು ಅದರಲಿ -
ನಂ ನಂಬರ್ರೇ ಫುಲ್ಲು
ಒಳಗೊಳಗೆ ಹ್ಯಾಪಿ -
ಆಗಿತ್ತು ನಂ ದಿಲ್ಲು
ಮಾರನೆ ದಿನವೇ -
ಹೋದೆ ಕಟ್ಟಲು ಬಿಲ್ಲು
ದಾರಿಯಲ್ಲಿ ಬಿದ್ದೆ -
ಎಡವಿ ಪಾಯದ ಕಲ್ಲು
ದೇವರ ದಯೆ ಮುರಿಲ್ಲಿಲ್ಲ -
ಯಾವುದೇ ಹಲ್ಲು
ಪರ್ವಾಗಿಲ್ಲ, ಏನಾಗಿಲ್ಲ ಅನ್ಕೊತ -
ಹೋಗಿ ಸಾಲಿನಲಿ ನಿಲ್ಲು
ಮುಂದಿದ್ದವ ಹೊಡೆಯುತ್ತಿದ್ದ ಗಬ್ಬುನಾತ -
ಕುಡಿದಿದ್ದ ಅನ್ಸತ್ತೆ ಆಯಿಲ್ಲು
ಒಟ್ನಲ್ಲಿ ಬಿಲ್ ಕಟ್ಟಿ ಮನೆಗ್ -
ಬರೋಷ್ಟರಲ್ಲಿ ಆಗಿದ್ದೆ ನಾ ಡಲ್ಲು !!


(ವೋಲ್ವೋ ಬಸ್ ನಲ್ಲಿ ಪಕ್ಕ ಕೂತು ಮಾತನಾಡಿಸಲು ಅಂಜುತ್ತಿದ್ದ ಹುಡುಗನ ಬಗ್ಗೆ ಗೆಳತಿ! ಹೇಳಿದಾಗ ಬರೆದದ್ದು )

ಪಕ್ದಲ್ ಕೂತಿರೋ ಚೆಲ್ವ
ಯಾಕೋ ಮಾತಾಡುಸ್ತಿಲ್ಲ ಅಲ್ವ?
ನೀನೆ ಕೇಳು, ತಿಂತ್ಯ ಹಲ್ವ?
ಅಂದ್ರೆ ಅವ, ಕೊಡು ಮೆಲ್ವ (ಮೆಲ್ಲುವ)
ಆಗ ತೋರ್ಸು ನಿನ್ ಗಲ್ವ (ಗಲ್ಲವ)
ಯಾರ್ಗು ಕಾಣ್ಸೋಲ್ಲ, ಅದು ವೋಲ್ವ !!

10:50PM - 9:15PM = ??

ನಾನಂದೆ ನೂರು ಮಿನಿಟು
ಅವಳಂದಳು ತೊಂಬತೈದು ಮಿನಿಟು
ಶುರುವಾಯಿತು ನನ್ನದೊಂದು ಚುಟುಕು
ಲೆಕ್ಕದಲಿ ನಾ ಬಹಳ ವೀಕು
ಆಗಿರ್ಲ್ಲಿಲ್ಲ question paper ಲೀಕು
supervisor ಆಗಿದ್ದವ ಟಾಕು-ಠೀಕು
ಹಾಗಾಗಿ ಆಗಿದ್ದೆ exam hallನಲ್ಲಿ  ಲಾಕು
ಎಲ್ಲಾ ಗೊತ್ತಿರೋನ್ ತರ ಕೊಡ್ತಿದ್ದೆ ಪೋಸು, ಆದ್ರೆ ಅದು ಬರೀ ಫೇಕು
result ಬಂದಾಗ ಆಗಿದ್ದೆ ನಾ ಬಾರಿ ಜೋಕು
ಅಮೇಲ್ supplementary ಬರ್ದ್ ತೊಗೊಂಡೆ passing ಮಾರ್ಕು !!

ಪಂಚ್ : ನಂದ್ copy ಮಾಡಿದವ್ನ್ ಪಡ್ದಿದ್ದ Rank-u :P
                                               
*******

Wednesday, December 18, 2013

ಸುಧಾಮಂಗಳ

ಪೇಜಾವರ ವಿಶ್ವೇಶತೀರ್ಥ ಶ್ರೀಗಳ
ಮೂವತ್ತೆರಡನೇ ಸುಧಾ ಮಂಗಳ
ನಡೆದದ್ದು ವಿದ್ಯಾಪೀಠದ ಅಂಗಳ
ನೆರೆದಿತ್ತು ಜಾತ್ರೆಯ ಜನ ಜಂಗುಳ(ಳಿ)
ನಡೆದಿತ್ತು ಪರೀಕ್ಷೆ ವಿದ್ಯಾರ್ಥಿಗಳ
ಎಲ್ಲೆಲ್ಲೂ ಪಸರಿತ್ತು ನ್ಯಾಯಸುಧೆಯ ಪರಿಮಳ
ಜೊತೆಗೆ ಸಾಗಿತ್ತು ತತ್ವಜ್ಞಾನ ಸಮ್ಮೇಳ(ನ) -
ಮತ್ತು ಜನ್ಮಶತಮಾನೋತ್ಸವ ವಿದ್ಯಾಮಾನ್ಯ ಶ್ರೀಗಳ
ಶ್ರೀಗಳ ಇಚ್ಚೆಯಂತೆ ಮಾಡಿದರು ನಾರಾಯಣ ಮಂತ್ರದ ಜಪಗಳ
(ಇದರಿಂದಾಯಿತು ಕಲಿಗೆ ಉಪಟಳ!)
ಹಾಡಿ ಹೊಗಳಿದರು ವಿದ್ಯಾಮಾನ್ಯ ಗುರುಗಳ
ವರ್ಣಿಸಲಾಗದ ಆನಂದ-ಭಾಗವಹಿಸಿದವರೇ ಧನ್ಯ-ಇನ್ನಷ್ಟು ನಡೆಯಲಿ ಇಂಥ ಸುಧಾಮಂಗಳ!!




Friday, December 13, 2013

'ಹರಿ'ದ ಮನಸಿನ ವಿಚಾರ ಧಾರೆ


ಯಾರ್ಗೆ ಎಷ್ಟು ಅರ್ಥ ಆಗತ್ತೋ ಯಾರಿಗೂ ಗೊತ್ತಿಲ್ಲ!

ಮನಸ್ಸಿಗೆ ಅನ್ನಿಸಿದ್ದನ್ನು ಶೇಕಡ ೧೦೦ ರಷ್ಟು ಕಾರ್ಯಗತ ಮಾಡುವವನೇ ಮಹಾತ್ಮ . 

ಯಾವ ಕೆಲಸವೇ ಆದರೂ ಇಷ್ಟವಿಲ್ಲದೇ ಬಿಟ್ಟು ಹೋಗುವುದಕ್ಕೂ ಹೆದರಿ ಬಿಟ್ಟು ಹೋಗುವುದಕ್ಕೂ ವ್ಯತ್ಯಾಸವೇ ಇಲ್ಲವೇ? 

ಹೆಚ್ಚು ಮಾತು ಕಡಿಮೆ ಕೆಲಸ - ಮಾಡಿದರೆ ಆಗುವೆ ನೀ ಕಸ! 

ಯಾರಿಗೆ ಯಾವ ಕೆಲಸದಲ್ಲಿ ಪ್ರಾವಿಣ್ಯತೆ ಇರುವುದೋ ಆ ಕೆಲಸ ಅವರೇ ಮಾಡಿದರೆ ಉತ್ತಮ. 

ಹಣ ಸಂಪಾದನೆ ಜೀವನೋಪಾಯಕ್ಕೇ ಹೊರತು, ಹಣ ಸಂಪಾದನಯೇ ಜೀವನವಲ್ಲ! ಈ ಸತ್ಯದ ಅರಿವು ನನಗೆ ಇಷ್ಟು ಬೇಗ ಆದದ್ದು ಸಂತೋಷದ ವಿಷಯವಾದರೂ ಅದು ವಿಪರ್ಯಾಸವೇ ಸರಿ. 

ಪರರಿಗೆ ಪರಿಚಯಿಸಿಕೊಡುವುದಕ್ಕೇ (ನಿನಗೆ ಬೇಡವಾಗಿದ್ದರೂ) ಹೆಸರು ಖ್ಯಾತಿ ಹೊಂದಿರು. 

ಅಹಂಕಾರ ಸ್ವಾಭಿಮಾನ - ಎರಡೂ ಬಿಟ್ಟಿರು!

ನೌಕರಿಯಲ್ಲಿ ಪದೋನ್ನತಿ ಪಡೆದರೆ ಪಾರ್ಟಿ.. ಆಧ್ಯಾತ್ಮಿಕದಲ್ಲಿ ಪದೋನ್ನತಿ (ಆಚಾರ್ಯರ ಒಂದು ಗ್ರಂಥದ ಮಂಗಳ ಮಾಡಿದರೆ) ಪಡೆದರೆ ಜೀವನ ಪಲ್ಟಿ! [ಜೀವ ನ ಸಾಧನೆಗಿಂತ ಜೀವ ನ ಸಂಪಾದನೆಯೇ ಅತಿ ಮುಖ್ಯ! ಆಲ್ವಾ? ]

ಜನರು ಪ್ರೀತಿಸುವುದು ನಿನ್ನ ಸ್ವಭಾವವನ್ನಲ್ಲ! ಅವರು ಪ್ರೀತಿಸುವುದು ಜ್ಞಾನ ಸಂಪತ್ತು ಅಥವಾ ವಿತ್ತ ಸಂಪತ್ತು. ನಿನ್ನಲ್ಲಿರುವ ಜ್ಞಾನದಿಂದ ವಿತ್ತ ಆರ್ಜನೆಯಾಗುತ್ತಿದ್ದರೆ ಮಾತ್ರವೇ ಆ ಜ್ಞಾನಕ್ಕೆ ಬೆಲೆ. ಹಾಗಾಗಿ ಹೆಚ್ಚಾಗಿ ಜನ ನಿನ್ನ ಮೆಚ್ಚುವುದು ನಿನ್ನಲ್ಲಿರುವ ವಿತ್ತ ಸಂಪತ್ತಿನ ಸಲುವಾಗಿಯೇ!

ಮನಸ್ಸು ಒಳ್ಳೆಯ ದಾರಿಯನ್ನು ತೋರುತ್ತದೆ ಹಾಗೆಯೇ ಕೆಟ್ಟ ದಾರಿಯನ್ನು ತೋರುತ್ತದೆ. ಒಳ್ಳೆ ಕಡೆ ಹೋಗೋದಕ್ಕೆ ಪ್ರಚೋದನೆಯನ್ನು ಕೊಡುತ್ತದೆ. ಆದರೆ ಸನ್ಮಾರ್ಗದಲ್ಲಿ ನಡೆಯಲು ಹಾತೊರೆದಾಗ, ಸುತ್ತಲಿನ ಬಂಧು ಮಿತ್ರರ ಕೈಯಲ್ಲಿ ಉಪದೇಶವೆಂಬ ಹಗ್ಗ ಕೊಟ್ಟು ನಿನ್ನನ್ನು ಹಿಂದಕ್ಕೆ ಎಳೆಸುತ್ತದೆ. 

ನಿನ್ನ ಬದುಕು ನಿನ್ನದಲ್ಲ, ಪರರದು - ಇದೇ ಇಂದಿನ ದಿನದ ಪರೋಪಕಾರಾರ್ಥಮಿದಂ ಶರೀರಂ!

ಗೂಡಲ್ಲಿ ಚೇಳಿದೆ, ಕೈ ಇಟ್ಟಲ್ಲಿ ಅದು ಕಚ್ಚುತ್ತದೆ ಎಂದು ಗೊತ್ತಿದ್ದರೂ ಮತ್ತೊಬ್ಬರ ಸಂತೋಷಕ್ಕಾಗಿ ಗೂಡಲ್ಲಿ ಕೈಯಿಟ್ಟು ಚೇಳು ಬಳಿ ಕುಟುಕಿಸಿಕೊಳ್ಳುವುದು ಮೂರ್ಖತನದ ಪರಮಾವಧಿಯಾದರೂ, ಅದೇ ಇಂದಿನ ಜೀವನ ಶೈಲಿ!! ಕಚ್ಚಿಸಿಕೊಂಡವ ಬಾಗುಂದಿ ಎಂದೇ ಹೇಳಬೇಕು! 

ಧರಿಸುವ ವಸ್ತ್ರ ಇರುವ ಜಾಗ ಬರುವ ಹಣ ಹುಟ್ಟುವ ಮಗು - ಸದಾ ಇದೇ ಚಿಂತೆ! ಇನ್ನೇಷ್ಟು ಜನ್ಮವೋ ಇದರಿಂದ ಹೊರಬರಲು??

ಎಲ್ಲವನ್ನೂ ಬಿಟ್ಟು ಹೋಗುವುದಕ್ಕೆ ಮಹಾಪರ್ವದ ವಿದ್ಯಾಧರನೊಬ್ಬನಿಂದಲೇ ಸಾಧ್ಯ![ಅದು ಧಾರಾವಾಹಿಯಲ್ಲಿ ಮಾತ್ರ]. 

ಜಾತಿ ಯಾವುದಾದರೇನು ರಾಶಿ ಬಲು ಮುಖ್ಯ!

ಕಾಲಿಗೆ ಬಿದ್ದಾದರೂ ಸರಿ ಕೆಲಸ ಗಿಟ್ಟಿಸುಕೋ - ಇಷ್ಟವಿದೆಯೋ ಇಲ್ಲವೋ ಕೇಳುವವರ್ಯಾರು ?

ತಂದೆ ತಾಯಿಯರ ವಚನವನ್ನು ಎಂದಿಗೂ ಕೇಳದೇ ಇರಬೇಡ. ಆ ಸಮಯಕ್ಕೆ ಅದು ನಿನಗೆ ಸರಿ ಕಂಡು ಬರದಿದ್ದರೂ ಭವಿಷ್ಯದಲ್ಲೊಂದು ದಿನ [ನನಗೆ ಸರಿಯಾಗಿ ಏಳು ವರ್ಷ ಬೇಕಾಯಿತು] ಅದು ಹೇಗೆ ಸರಿ ಎಂಬುದು ನಿನಗೆ ಅರ್ಥವಾಗುತ್ತದೆ! 

'Dell'ಲ್ಲಿಯಲ್ಲಿ ಅತಂತ್ರ ಸ್ಥಿತಿ!

(೧). ಯಸ್ಯಾಸ್ತಿ ವಿತ್ತಂ ಸ ನರಃ ಸ ಕುಲೀನಃ ..... (೨)..... ಆಯೆ ದುಃಖಮ್ ವ್ಯಯೇ ದುಃಖಮ್ ಧಿಕ್ ಅರ್ಥಃ ಕಷ್ಟಸಂಶ್ರಯಃ (೩) ಗಾಳಿ ಬಂದ ಕಡೆ ತೂರಿಕೋ 

ರಾಜ್ಯಪಾಲರಿಗಿರುವ ಬುದ್ದಿ ಹಂಸರಾಜರುಗಳಿಗೇಕಿಲ್ಲ ?

Last but not least,
ಜೀವನದ ಒಂದು ಘಟ್ಟದಲ್ಲಿ ನೀನು ಪರಾವಲಂಬಿ ಅರ್ಥಾತ್ ನಿನ್ನ ಯಾವ ಸ್ವಂತ ನಿರ್ಧಾರಕ್ಕೂ ಬೆಲೆಯಿರುವುದಿಲ್ಲ. [ಒಂದರ್ಥದಲ್ಲಿ ಇಡೀ ಜೀವನವೇ ಪರಾವಲಂಬನ - ಆ ಪರ ವ್ಯಕ್ತಿ ಭಗವಂತನಾಗಬೇಕೆಂಬುದೇ ನನ್ನಾಶಯ]

ಈಗ ಮತ್ತೊಮ್ಮೆ ಮೊದಲನೇ ವಾಕ್ಯ ಓದಿ !!

*******