Pages

Tuesday, December 12, 2017

ಮತ ಯಾರಿಗೆ ? - ಜಿಜ್ಞಾಸೆ



ಇನ್ನೇನು ಕರ್ನಾಟಕ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದೆ. ಅಬ್ಬಬ್ಬಾ ಅಂದರೆ ಇನ್ನಾರು ತಿಂಗಳಲ್ಲಿ ಮುಂದಿನ  ಸರ್ಕಾರ ಮತ್ತು ಮುಂದಿನ ಮುಖ್ಯಮಂತ್ರಿ ಆಗಿ ಹೋಗಿರುತ್ತಾರೆ.  ಪ್ರತೀ ಚುನಾವಣೆಯಲ್ಲೂ ಕಣ್ಮುಚ್ಚಿ ಭಾರತೀಯ ಜನತಾ ಪಕ್ಷಕ್ಕೆ ಮತ ಒತ್ತುತ್ತಿದ್ದ ನನಗೆ ಈ ಬಾರಿ ಯಾರಿಗೆ ಮತ ಹಾಕಬೇಕೆಂಬ ಜಿಜ್ಞಾಸೆ.

ಬಾಯ್ಬಿಟ್ಟರೆ ಜಾತಿ ರಾಜಕೀಯ, ಅಲ್ಪಸಂಖ್ಯಾತ ಎಂದು ಕರೆಸಿಕೊಳ್ಳುವವರ ಓಲೈಕೆ, ಹಿಂದೂ ವಿರೋಧಿ ಕಾಂಗ್ರೇಸ್ ಪಕ್ಷಕ್ಕಂತೂ ಖಂಡಿತ ನಾನು ಮತ ನೀಡಲಾರೆ.
ಗಾಳಿ ಬಂದಲ್ಲಿ ತೂರುವ, ಕುಟುಂಬಕ್ಕಷ್ಟೇ ಸೀಮಿತವಾದ, ಜಾತ್ಯಾತೀತ ಎಂದು ಬರೇ ಹೆಸರಿನಲ್ಲಿ ಉಳಿಸಿಕೊಂಡಿರುವ ಜನತಾ ದಳವನ್ನು ನಂಬುವಂತೆಯೇ ಇಲ್ಲ.
ಇನ್ನ ಉಳಿದಿರುವುದು ಭಾರತೀಯ ಜನತಾ ಪಕ್ಷ !

ಒಂದು ವೇಳೆ ನಾನು ಬಿಜೆಪಿಗೆ ಮತ ನೀಡಿ, ಬಿಜೆಪಿ ಸರ್ಕಾರ ರಚಿಸಿತು ಎಂದಿಟ್ಟುಕೊಳ್ಳಿ (ನಾನು ಮತ ನೀಡಿದ ತಕ್ಷಣ ಬಿಜೆಪಿ ಗೆಲ್ಲುತ್ತೆ ಅಂತ ಅನ್ಕೋಬೇಡಿ ಮತ್ತೆ !),  ಆಮೇಲೆನಾಗುತ್ತದೆ? ಯಡ್ಯೂರಪ್ಪ ಮುಖ್ಯಮಂತ್ರಿ (?) ಆದರೆ ಅಶೋಕ ಈಶ್ವರಪ್ಪ ಉಪ-ಮುಖ್ಯಮಂತ್ರಿಗಳಾಗುತ್ತಾರೆ (LKG ಸರ್ಕಾರ) . ಹಿಂದೂ ವಿರೋಧಿಯಲ್ಲ ಅನ್ನೋದು ಬಿಟ್ಟರೆ ಮೇಲೆ ಹೇಳಿದ ಎಲ್ಲವೂ ಬಿಜೆಪಿಗೂ ಅನ್ವಯಿಸುವುದೇ! ಅಧಿಕಾರದಲ್ಲಿದ್ದಾಗ ಇವರು ಆಡಿದ ನಾಟಕ - ಪ್ರಹಸನಗಳನ್ನು ಕಣ್ಣಾರೆ ಕಂಡಿದ್ದೇವೆ.
ಯಡ್ಯೂರಪ್ಪ - ಈಶ್ವರಪ್ಪ ಅವರುಗಳ ಜಗಳದ ಜುಗಲ್ ಬಂದಿ, ಯಡ್ಯೂರಪ್ಪ - ಅನಂತಕುಮಾರ್ ರವರ ತೆರೆಮರೆ ಕಾದಾಟ,
ಅಧಿಕಾರ ಇದ್ದಾಗ ಯಡ್ಯೂರಪ್ಪ, ಜಗದೀಶಶೆಟ್ಟರ್ ಹಾಗು ಸದಾನಂದ ಗೌಡ ಮಾಡಿದ ಅಧಿಕಾರದ ದುರುಪಯೋಗ, ಸ್ವತಃ ಜೈಲಿಗೆ ಹೋಗಿಬಂದ ಯಡ್ಯೂರಪ್ಪ, ಹಾಲಪ್ಪ, ರೇಣುಕಾಚಾರ್ಯ, ಲಕ್ಷ್ಮಣ ಸವದಿಯರಂತ ಕಾಮಾಂಧರನ್ನು ಅಕ್ಕ-ಪಕ್ಕ ಕೂರಿಸಿಕೊಂಡಿರೊ ಯಡ್ಯೂರಪ್ಪ, ಬಾಯ್ಬಿಟ್ಟರೆ ಕೆಟ್ಟ ಕೊಳಕ ಮಾತಾಡುವ ಈಶ್ವರಪ್ಪ, ಯಾವ ಗೂಂಡಾಗಳಿಗೂ  ಕಮ್ಮಿ ಇಲ್ಲದ ಅಶೋಕ... ಹೀಗೆ ಪಟ್ಟಿ ಮಾಡುತ್ತಾ ಹೋದರೆ ಮುಗಿಯುವುದೇ ಇಲ್ಲ. ಶೋಭಕ್ಕನ ಬಗ್ಗೆ ಏನೂ ಹೇಳುವುದು ಬೇಡ ಅಂತಲೇ ಬಿಟ್ಟಿದ್ದೇನೆ.

ಮೋದಿ ಅಲೆ ಮೇಲೆ ತೇಲುತ್ತಿರುವ ಇವರ್ಯಾರಿಗೂ ಸ್ವಂತ ವರ್ಚಸ್ಸಿಲ್ಲ.  ಮೋದಿ ಮುಖ ನೋಡಿ ಇಲ್ಲಿ ಮತ ಹಾಕಲು ಸಾಧ್ಯವೇ ಇಲ್ಲ. ಮೇಲಾಗಿ ಇವರ್ಯಾರಿಗೂ ಕರ್ನಾಟಕದ ಬಗ್ಗೆ ಕನಸಿಲ್ಲ. ಪರಿವರ್ತನಾ ರ್ಯಾಲಿ ಗಳಲ್ಲಿ ಇವರ ಭಾಷಣಗಳನ್ನು ಕೇಳಿ. ಅಲ್ಲಿ ಕೇಳಿಸುವುದು ಬರೀ ರಾಜಕೀಯದ ದ್ವೇಷ, ಪರಸ್ಪರ ಹೀಯಾಳಿಕೆ,  ಏಕವಚನದ ಪ್ರಯೋಗ - ಮಾತಿನ ಮೇಲೆ ಹಿಡಿತವೇ ಇಲ್ಲ. Maturity ಅನ್ನೋದೇ ಇಲ್ಲ . ಇವರಿಗೆ ಬೇಕಿರುವುದು ಬರೀ ಅಧಿಕಾರ.
ಇನ್ನು ಬಿಜೆಪಿಯವರು ವಿರೋಧ ಪಕ್ಷವಾಗಿ ಮಾಡಿದ್ದಾದರೂ ಏನು? ಯಾವ ಪ್ರಕರಣವನ್ನು ಇತ್ಯರ್ಥ ಮಾಡಲೇ ಇಲ್ಲ , ಕೊನೆಯವರೆಗೂ ಕೊಂಡೊಯ್ಯಲಿಲ್ಲ.  ಸೋಮಾರಿಗಳಾಗಿ ನಿದ್ದೆ ಮಾಡುತ್ತಿದ್ದವರನ್ನು ಜನರೇ ಬಡಿದ್ದೆಬ್ಬಿಸಬೇಕಾಯಿತು. ಅದು ಡೀಕೆ ರವಿ ಪ್ರಕರಣವಿರಬಹುದು, ಗಣಪತಿ ಪ್ರಕರಣವಿರಬಹದು, ಮೇಟಿ, ತಂವೀರ್ ಸೇಠ್ , ಆಂಜನೇಯ, ಡೀಕೇಶಿ ಮುಂತಾದವರ ಪ್ರಕರಣಗಳಿರಬಹುದು . ಯಾವೂದಕ್ಕೂ ತಾರ್ಕಿಕ ಅಂತ್ಯ ಕಾಣಿಸಲು ಪ್ರಯತ್ನಿಸಲೇ ಇಲ್ಲ. ಎರಡು ದಿನ ಕಾಟಾಚಾರಕ್ಕೆ ಹೋರಾಟ ಮಾಡಿ ಒಂದು ಪ್ರೆಸ್ ಕಾನ್ಫರೆನ್ಸ ಮಾಡಿ ಎಲ್ಲವನ್ನೂ ಮುಗಿಸಿಬಿಟ್ಟರು. ಬಾಯ್ಬಿಟ್ಟರೆ ಎಲ್ಲಿ ನಮ್ಮ ಬುಡಕ್ಕೆ ಇನ್ಯಾವ ಬತ್ತಿ ಇಡುವರೋ ಎಂದು ಬಿಜೆಪಿಯವರು ಮುದುರಿ ಮೂಲೆಯಲ್ಲಿ ಕೂತಿದ್ದನ್ನು ನೋಡಿದವರಿಗೆ ಇವರುಗಳ ಮೇಲೆ ಅನುಮಾನ ಮೂಡಿರಿವುದು ತೀರಾ ಸಹಜವೇ.

ಈ ಬಾರಿ ಬಿಜೆಪಿ ಗೆ ಮತ ಅಂತ ತೀರ್ಮಾನಿಸೋದು ಬಹಳ ಕಷ್ಟ.

ಬಿಜೆಪಿಗೆ ತುರ್ತಾಗಿ ಮಾಡಬೇಕಿರುವುದು:
೧. ೭೫ನೇ ವಸಂತದ ಹೊಸ್ತಿಲ್ಲಲ್ಲಿರುವ, ಜೈಲಿಗೆ ಹೋಗಿ ಬಂದ ಯಡ್ಯೂರಪ್ಪ, ಸಾವಿರ ಜನರನ್ನು ಸೇರಿಸಲು ಅಶಕ್ಯರಾದ ಈಶ್ವರಪ್ಪ, ಕೇಸ್ ಗಳನ್ನು ಮಾಡಿಕೊಂಡಿರುವ ಹಾಲಪ್ಪ, ಸವದಿ, ರೇಣುಕಾಚಾರ್ಯ ಮುಂತಾದವರನ್ನು ಅಧಿಕಾರದಿಂದ ದೂರವಿಡಬೇಕು.
೨. ಯುವ ಜನರ ಕಣ್ಮಣಿಗಳಾದ ಅನಂತಕುಮಾರ್ ಹೆಗಡೆ, ಸುರೇಶ ಕುಮಾರ್, ಸಿ ಟಿ ರವಿ, ಪ್ರತಾಪ್ ಸಿಂಹ, ಪಿ ರಾಜೀವ್ ಮುಂತಾದ ಯುವ ನಾಯಕರನ್ನು ಮುಂಚೂಣಿಗೆ ತರಬೇಕು ಹಾಗು ಅಧಿಕಾರ ನೀಡಬೇಕು.
೩. ಕರ್ನಾಟಕದ ಬಗ್ಗೆ ಉಜ್ವಲ ಕನಸುಗಳನ್ನು ಹೊಂದಿರುವ ಚಕ್ರವರ್ತಿ ಸೂಲಿಬೆಲೆ, ರೋಹಿತ್ ಚಕ್ರತೀರ್ಥ, ವಿಶ್ವೇಶ್ವರ ಭಟ್ , ರವೀಂದ್ರ ಜೋಶಿ ಮುಂತಾದ ಪತ್ರಕರ್ತ / ಅಂಕಣಕಾರರನ್ನು ಪಕ್ಷಕ್ಕೆ ಕರೆ ತರಬೇಕು.
೪. ಅಧಿಕಾರಕ್ಕೆ ಬಂದರೆ ಕರ್ನಾಟಕವನ್ನು ಹೇಗೆ ಅಭಿವೃದ್ಧಿ ಮಾಡುತ್ತೇವೆ ಎಂಬುದನ್ನು ಎಳೆ ಎಳೆ ಯಾಗಿ ಬಿಡಿಸಿ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ತಿಳಿಸಬೇಕು. ಅಭಿವೃದ್ಧಿ ಪದ ಕೇವಲ ಪ್ರಣಾಳಿಕೆಗೆ ಮೀಸಲಾಗಬಾರದು.

ನಾಯಕರುಗಳು ಪರಿವರ್ತಿತರಾಗದೆ ಸುಮ್ಮನೆ ಪರಿವರ್ತನಾ ರ್ಯಾಲಿ ಗಳಲ್ಲಿ ಸಮಯ ಕಳೆಯುತ್ತಾ ಮೋದಿ ಅಲೆ ಮೇಲೆ ತೇಲಾಡುತ್ತೇವೆ ಎಂಬ ಭ್ರಮೆ ಬಿಡದಿದ್ದರೆ 'ಕರ್ನಾಟಕ 'ದ 'ಪ್ರಜ್ಞಾವಂತ' ಮತದಾರರು ಮತ್ತೊಂದು 'ಜನತಾ ಪಕ್ಷ'ದ ಕಡೆ ತಿರುಗಿ ನೋಡುವ ಅನಿವಾರ್ಯತೆಯನ್ನು ತಳ್ಳಿಹಾಕುವಂತಿಲ್ಲ .
*****

Monday, December 4, 2017

ಬ್ರಾಹ್ಮಣರು - ಅಸ್ಪೃಶ್ಯರು

ಹರಿ-ವಿಷ್ಣುವನ್ನು ಆರಾಧಿಸುವವರು ಹರಿಜನರು
ಅವರೇ ನಿಜವಾದ ಅಸ್ಪೃಶ್ಯರು
ಇಂದು ನಮ್ಮ ದೇಶದಲ್ಲಿ ಬ್ರಾಹ್ಮಣರೇ ಅಲ್ಪ-ಸಂಖ್ಯಾತರು
ಯಾವ ರಾಜಕೀಯ ಪಕ್ಷಕ್ಕೂ ವೋಟ್-ಬ್ಯಾಂಕ್ ಆಗಿ ಸಲ್ಲದವರು
ಮೀಸಲಾತಿ, ಸೌಲಭ್ಯ, ಭಾಗ್ಯ ಯೋಜನೆಗಳ ಹತ್ತಿರ ಕೂಡ ಸುಳಿಯದವರು
ಸ್ವಾಭಿಮಾನದ ಮೂರ್ತ ಸ್ವರೂಪರು, ಎಂದೂ ಸರ್ಕಾರದ ಆಶ್ರಯ ಬೇಡದವರು
ಎಲ್ಲರೊಂದಿಗೂ ಬೆರೆಯುವ ಸಮಚಿತ್ತದವರು
ಆದರೂ ಕಿಡಿಗೇಡಿಗಳ ಬಾಯಿಗೆ ಆಹಾರ ವಾಗುವವರು
ಬಂದರೂ ಇಂಥ ನೂರು ಹ.ಸೂ. ಭಗವಾನರು
ಅಲುಗಾಡಿಸಲೂ ಸಾಧ್ಯವಿಲ್ಲ ಬ್ರಾಹ್ಮಣತ್ವದ ಬೇರು 

Wednesday, November 29, 2017

ಪುನರ್ಜನ್ಮ- ಭಾಗ ೧




ಕಳೆದ (ಮತ್ಯಾವುದೋ?) ಜನ್ಮದಲ್ಲಿ ಸತೀಶನ ಹೆಂಡತಿಯಾಗಿದ್ದ ತಾರ ಈಗಿನ ಜನ್ಮದಲ್ಲಿ ನನ್ನ ಹೆಂಡತಿ ರೀಟಾಳೇ?? ಹೀಗೊಂದು ಪ್ರಶ್ನೆ ನಾಲ್ಕು ದಿನದಿಂದ ಜೋಸೆಫ್ನಿಗೆ ಇನ್ನಿಲ್ಲದಂತೆ ಕಾಡುತ್ತಿದೆಯಂತೆ. ಅಷ್ಟಕ್ಕೂ ಅವನಿಗೆ ಹೀಗೆ ಅನ್ನಿಸಲು ಕಾರಣವಾದರೂ ಏನು???

*********************************************************************************

ತಂದೆ-ತಾಯಿಯರಿಗೆ ಶಂಕರ ಹುಟ್ಟಿದ್ದು ಎರಡನೆಯವನಾಗೋ ಮೂರನೆಯವನಾಗೋ. ಅದೂ ಅವನಿಗೆ ಸರಿಯಾಗಿ ಗೊತ್ತಿಲ್ಲ. ಆ ವಿಷಯ ತಿಳಿದವರ್ಯಾರು ಈಗ ಇವನ ಜೊತೆಗಿಲ್ಲ. ಈಗೇನು, ಅಂತಹ ವಿಷಯ ಅರ್ಥವಾಗುವ ಬುದ್ದಿ, ವಯಸ್ಸು ಶಂಕರನಿಗೆ ಬಂದಾಗಲಿಂದ ಅವರ್ಯಾರು ಇಲ್ಲ. ಇವನ ಪಾಲಿಗೆ ಇಲ್ಲವೋ ಅಥವಾ ಅವರೇ ಈ ಜಗತ್ತಿನಲ್ಲಿ ಇಲ್ಲವೋ ಯಾವುದೂ ಶಂಕರನಿಗೆ ತಿಳಿಯದು. ಆಗಿನಿಂದಲೇ ಶಂಕರನಿಗೆ ಹುಟ್ಟು-ಸಾವುಗಳ ಬಗೆಗಿನ ಜಿಜ್ಞಾಸೆ ಶುರುವಾದದ್ದು.

ಶಂಕರ ಹುಟ್ಟಿದ್ದು ಕರ್ನಾಟಕದ ಯಾವುದೋ ಹಳ್ಳಿಯಲ್ಲಿ. ಅವರ ತಂದೆ ಶಾಲಾ ಮಾಸ್ತರ. ಇವನು ಕಂಡ ಹಾಗೆ ತಾಯಿ ಸದಾ ಬಾಣಂತಿ ಇಲ್ಲ ಬಸುರಿ. ಕೆಳ ಮಧ್ಯಮ ವರ್ಗದ ಅವಿಭಕ್ತ ಕುಟುಂಬ. ನಾಕಾರು ಚಿಕ್ಕಪ್ಪ-ದೊಡ್ದಪ್ಪಂದಿರು, ಇನ್ನು ಮದುವೆಯಾಗದ ಅತ್ತೆಯರು, ಗಂಡ ಸತ್ತು ತವರು ಮನೆ ಸೇರಿದ್ದ ದೊಡ್ಡತ್ತೆ, ಅವರ ಮಕ್ಕಳುಗಳು ಎಲ್ಲಾ ಸೇರಿ ಏನಿಲ್ಲವೆಂದರೂ ೩೦-೪೦ ಜನ. ಒಬ್ಬಬ್ಬರದು ಒಂದೊಂದು ಉದ್ಯೋಗ. ಎಲ್ಲರ ಉದ್ಯೋಗ ಶಂಕರನಿಗೆ ಜ್ಞಾಪಕವಿಲ್ಲ. ಒಬ್ಬ ಚಿಕ್ಕಪ್ಪ ದರ್ಜಿ, ಇನ್ನೊಬ್ಬ ಕಟ್ಟಿಗೆ ಹೊಡೆಯುವವ, ಮತ್ತೊಬ್ಬ ದೊಡ್ಡಪ್ಪ ಮುನ್ಸಿಪಾಲಿಟಿಲಿ ಏನೊ ಆಗಿದ್ದ. ಒಬ್ಬತ್ತೆ ಅಂಗನವಾಡಿಗೆ ಹೋದರೆ ಇನ್ನೊಬ್ಬತ್ತೆ ನರ್ಸ್. ಅವರುಗಳ ಮಕ್ಕಳು ಎಲ್ಲೆಲ್ಲಿ ಏನೇನು ಓದುತ್ತಿದ್ದರು, ಕೆಲವರು ಆಗಲೇ ಕೆಲಸಕ್ಕೆ ಸೇರಿದ್ದರು, ಎಲ್ಲಿ ಕೆಲಸ ಇದ್ಯಾವುದೂ ಶಂಕರನಿಗೆ ನೆನಪಿಲ್ಲ. ಅವರುಗಳ ಪೈಕಿ ಯಾರೋ ಒಬ್ಬರು ಮಂತ್ರವಾದಿಯ ಬಳಿಗೆ ಕರೆದೊಯ್ದಿದ್ದು ಶಂಕರನಿಗೆ ನೆನಪಿದೆ.

*********************************************************************************

ಜೋಸೆಫ್ ಹೇಳಿದ್ದು :

ಒಮ್ಮೆ ಕುಟುಂಬದವರೆಲ್ಲರೂ ಎಲ್ಲಿಗೋ ಹೊರಟಿದ್ದರು. ಜಾತ್ರೆ ಇರಬಹುದೇನೋ. ಪ್ರತಿವರ್ಷ ಹೋಗುತ್ತಿದ್ದರೇನೋ? ನೆನಪಿಲ್ಲ. ಆಗ ನನಗೆ ಆರೇಳು ವಯಸ್ಸು. ನೋಡಿದಷ್ಟೂ ಜನ ಸಾಗರ. ಎಲ್ಲೋ ಯಾರದೋ ಹಿಂದೆ ಹೆಜ್ಜೆ ಹಾಕುತ್ತಿದ್ದೆ. ನನ್ನವರು ಎಲ್ಲೋ ನಾನು ಎಲ್ಲೋ. ನಾನು ಕಳೆದು ಹೋದೆ. ಎಷ್ಟು ಅತ್ತರೂ ಹುಡುಕಿದರೂ ಯಾರೂ ಸಿಗಲಿಲ್ಲ. ಶಿಲುಬೆಯ ಪದಕ ಹಾಕಿದ್ದ ಬಿಳಿ ಬಟ್ಟೆ ಧರಿಸಿದ್ದ ಎಡಗೈಯಲ್ಲಿ ಯಾವುದೋ ಪುಸ್ತಕ ಹಿಡಿದ್ದಿದ್ದ ಒಬ್ಬರು ನನಗೆ ಚಾಕೊಲೇಟ್ ಕೊಡಿಸಿ ಎತ್ತಿಕೊಂಡು ಹೋದರು.
ನೀವ್ಯಾರೆಂದು ಕೇಳಿದ್ದಕ್ಕೆ ನಿನ್ನ ಮಾಮ ಎಂದಿದ್ದರು.

ಕುಡಿಯಲು ಬಾದಾಮಿ ಹಾಲು, ತಿನ್ನಲು ಬ್ರೆಡ್ಡು ಜಾಮು, ಮಾವಿನ ಹಣ್ಣು, ಹಲಸಿನ ಹಣ್ಣು, ಹಾಲು ಅನ್ನ ಎಲ್ಲಾ ಕೊಟ್ಟರು. ಹಸಿವಾಗಿದ್ದರಿಂದ ನಾನು ಎಲ್ಲಾ ತಿಂದೆ. ಮಾಮ ನಾನು ನಿಮ್ಮನ್ನ ನಮ್ಮನೇಲಿ ನೋಡೇ ಇಲ್ಲ, ಬನ್ನಿ ಮನೆಗೆ ಹೋಗೋಣ ಅಂದೆ. ಇಲ್ಲ ಇದೆ ನನ್ನ ಮನೆ, ನೀನು ಇಲ್ಲೇ ಇರಬೇಕು ಇನ್ನು ಮೇಲೆ , ನಿಮ್ಮಪ್ಪ ಹೇಳಿದ್ದಾರೆ ಅಂದರು. ನನಗೆ ಸಂತೋಷದ ಜೊತೆ ಕೊಂಚ ಬೇಸರವೂ ಆಯಿತೇನೋ. ಏನೂ ಮಾಡಲು ತಿಳಿಯದು. ದೊಡ್ಡವರು ಹೇಳಿದ ಹಾಗೆ ಕೇಳುವುದೇ ಸರಿ ಎಂದು ಮನೆಯಲ್ಲಿ ಹೇಳಿದ್ದರು. ಕಾರಿನಲ್ಲಿ ಕೂಡಿಸಿಕೊಂಡು ಎಲ್ಲಿಗೋ ಕರೆದುಕೊಂಡು ಹೋದರು. ರಾತ್ರಿಯಲ್ಲ ಕಾರಲ್ಲೇ ನಿದ್ದೆ ಮಾಡಿದ ನೆನಪು.

ಬೆಳಗ್ಗೆ ಆದಾಗ ಯಾರೋ ಎತ್ತಿಕೊಂಡು ಹೋಗಿ ಸ್ನಾನ ಮಾಡಿಸಿ ಒಳ್ಳೆ ಬಟ್ಟೆ ಹಾಕಿ ಕಾರಲ್ಲಿ ಕೂಡಿಸಿಕೊಂಡು ಕರೆದೊಯ್ದರು.
ದೊಡ್ಡ ಹಾಲಿನಲ್ಲಿ ನನ್ನ ಮಾಮ ಸ್ಟೇಜ್ ಮೇಲೆ ಮೇಣದ ಬತ್ತಿ ಹಿಡಿದು ನಿಂತಿದ್ದರು. ಸುಮಾರು ಜನ ಸೇರಿದ್ದರು. ಎಲ್ಲರೂ ಪುಸ್ತಕ ಹಿಡಿದು ಏನೇನೋ ಓದಿದರು. ಆಮೇಲೆ ನನ್ನನ್ನು ಮಾಮನ ಬಳಿ ಕರೆದೊಯ್ದರು. ತಲೆಗೆ ನೀರು ಚುಮುಕಿಸಿ, ದೊಡ್ಡ ಶಿಲುಬೆಯನ್ನು ತಲೆಗೆ ತಾಕಿಸಿ, ನಿನ್ನ ಹೆಸರು ಜೋಸೆಫ್ ಅಂದರು. ಇಲ್ಲ ಇಲ್ಲ ನಾನು ಶಂಕರ ಅಂದೆ. ನಿನ್ನೆ ತನಕ ಶಂಕರ, ಇವತ್ತಿಂದ ಜೋಸೆಫ್ ಅಂದರು. ಅಮ್ಮನನ್ನು ಕೆಲವರು ಶಾರದ ಕೆಲವರು ಸೀತಾ ಅಂತ ಕರಿತಿದ್ದುದು ನೆನಪಾಗಿ, ಇದು ಹಾಗೇನಾ? ಅಂದೆ. ಮಾಮ ನಕ್ಕು ತಲೆಯಾಡಿಸಿದರು. ಆಮೇಲೆ ನನ್ನ ಕುತ್ತಿಗೆಗೊಂದು ಶಿಲುಬೆಯಿದ್ದ ಸರ ಹಾಕಿದರು.
ನನ್ನ ಹಾಗೆ ಐದಾರು ಹುಡುಗ ಹುಡುಗಿಯರಿಗೂ ಹಾಗೆ ಮಾಡಿದರು. ಎಲ್ಲರಿಗೂ ಸುಮಾರು ನನ್ನ ವಯಸ್ಸೇ. ಶಿವಕುಮಾರ ಶಿಜು ಆದ, ನಯನ ಅಡೆನ ಆದಳು, ಮಲ್ಲನಗೌಡ ಅಂತೋಣಿ ಆದ, ನಂದಿನಿ ಡನೆಲ್ಲೆ ಆದಳು. ಇನ್ನು ಏನೇನೋ .. ಸರಿಯಾಗಿ ನೆನಪಿಲ್ಲ. ಅದಾಗಿ ಕೆಲ ದಿನ ನಾನು ನಮ್ಮ ಹಳೆ ಹೆಸರು - ಹೊಸ ಹೆಸರು ಸರಿಯಾಗಿ ಹೇಳುವ ಆಟ ಆಡುತ್ತಿದ್ದೆವು. ಕ್ರಮೇಣ ನಮಗೂ ಮತ್ತೊಬ್ಬರ ಹಳೆ ಹೆಸರುಗಳು ಮರೆಯಲು ಶುರುವಾಯಿತು.
                                                                                                                          ಮುಂದುವರೆಯುವುದು ..... 

Tuesday, November 28, 2017

ಚಂಪಾ - ಗಾಂಪ

೮೩ನೇ ಕನ್ನಡ ಸಾಹಿತ್ಯ ಸಮ್ಮೇಳಾನಾಧ್ಯಕ್ಷ ಚಂಪಾ
ಎಲ್ಲಿ ಏನು ಮಾತಾಡಬೇಕೆಂಬ ಜ್ಞಾನವಿಲ್ಲದ ಗಾಂಪ
ಇವನ ಕಾರ್ಯವೈಖರಿ ಹೋಲುವುದು ಪಿಂಪ (PIMP)
ಸದಾ ಹೊಡೆಯುವನು 'ಕೈ' ಬಳಗದಲ್ಲಿ ಪಂಪ (PUMP)
ಮೋದಿಯವರನ್ನು ಟೀಕಿಸಲು ಹಾಕುವನು ಜಂಪಾ (JUMP)
ಈ ಎಡವಟ್ಟನಿಗೆ ಬೀಳಬೇಕಿದೆ ಎಕ್ಕಡದಲ್ಲಿ ಬಂಪ (BUMP)
                               
  ~~~~~~~~~~~~000000~~~~~~~~~~~

PIMP - a man who controls prostitutes, especially by finding customers for them, and takes some of the money that they earn

PUMP - to keep asking someone for information, especially in a way that is not direct

JUMP - to push yourself suddenly off the ground in order to go over something or to attack someone suddenly

BUMP - to hit something with force

Wednesday, April 13, 2016

ತಾಪಮಾನ













ಬೆಂಗಳೂರಿನ ಗರಿಷ್ಠ ತಾಪಮಾನ ತಲುಪಿದೆ ನಲವತ್ತೆರಡು
ಅದಕ್ಕೆ ಕಾರಣಗಳೆನೆಂದು ನೀ ಪಟ್ಟಿ ಮಾಡು
ದಶ ದಿಕ್ಕುಗಳಿಂದಲೂ ಕಬಳಿಕೆಯಾಗುತ್ತಿದೆ ಕಾಡು
ಕೆರೆಗಳಂತೂ ಆಗಿವೆ ಕಾಂಕ್ರೀಟ್ ಕಟ್ಟಡಗಳ ಬೀಡು
ಎಲ್ಲಾ ಕಡೆ ಥಳಥಳಿಸುತಿದೆ ಡಾಂಬರು ರೋಡು
ಮಾಯವಾಗಿದೆ ನಗರದ ಹೊರವಲಯದಲ್ಲಿ ಗುಡ್ಡ-ಗಾಡು
ಹುಡುಕಿದರೂ ಕಾಣದಾಗಿದೆ ಹಕ್ಕಿ-ಪಕ್ಷಿಗಳ ಗೂಡು
ವನ್ಯ ಜೀವಿಗಳು ತಪ್ಪುತ್ತಿವೆ ಅದರ ಜಾಡು
ಇದಕ್ಕೆಲ್ಲ ಏನು ಪರಿಹಾರ ನೀ ತಡಕಾಡು
ರಜಾ ದಿನಗಳಲ್ಲೊಂದು ಸಸಿ ನೆಡು
ಅದ ಪೋಷಿಸಿ ಆರೈಕೆ ಮಾಡು
ಪರಿಹಾರ ಕಾರ್ಯ ತಡ ಆದರೆ ಕಾದಿದೆ ದೊಡ್ಡ ಕೇಡು

Friday, April 1, 2016

ಮಾತು


ಮಾತು ಅತಿ ಹೆಚ್ಚಾದರೆ ಅದಕ್ಕಿಲ್ಲ ಕಿಮ್ಮತ್ತು
ಮಾತು ಅತಿ ಕಡಿಮೆಯಾದರೂ ಇಲ್ಲ ಗಮ್ಮತ್ತು 
ಹೆಚ್ಚು-ಕಡಿಮೆಯಾದರಂತೂ ಕಾದಿರತ್ತೆ ಆಪತ್ತು 
ಮಿತವಾಗಿ ಮಾತಾಡುವುದು ಒಂದು ಕರಾಮತ್ತು 
ಸಿದ್ದಿಸಿಕೊಂಡವನಿಗೆ ಅದೇ ದೊಡ್ಡ ಸಂಪತ್ತು 
ಮಧ್ಯೆ ಮಾತಾಡುವರಿಗೆ ಹೇಳುವರು, ಅವರಿಗೆ ಯಾಕೆ ಬೇಕಿತ್ತು 
ಕೆಲವರು ಮಾತಾಡಿದರಂತೂ ಉದುರುವುದು ಮುತ್ತು 
ಕೆಲವೊಮ್ಮೆ ಮಾತಾಡಿದರೆ ಬರುವುದು ಕುತ್ತು 
ಆದರಿಂದಲೇ ಮಾತಾಡು ನೀ ಎಚ್ಚೆತ್ತು
*******

Thursday, January 21, 2016

ಪ್ರಕಟಿಸದ ಟ್ವೀಟ್ಗಳು - ೧


(೧/೨) ನಮ್ಮ ದೇಶದ ಇಂದಿನ ಈ (ದುರ)ಸ್ಥಿತಿಗೆ , ನನ್ನ ಪ್ರಕಾರ ಅಂಗಾನೆಯರೇ ಪ್ರಮುಖ ಕಾರಣರು. ಯಾರು ಈ ಅಂಗಾನೆಯರು?
೧. ನಾಕಾರು ದೇಶದ ಕಾನೂನು ಪದ್ದತಿಗಳನ್ನು ಕದ್ದು ಚಿತ್ರಾನ್ನ ಮಾಡಿ ನಮ್ಮ ದೇಶಕ್ಕೆ ಅಳವಡಿಸಿದ, ಎಲ್ಲೋ ಮೂಲೆಯಲ್ಲಿದ್ದ ಜಾತಿಯನ್ನು ದೇಶದ ನಡುವಿಗೆ ತಂದು ಜಾತಿ ಆಧಾರದಲ್ಲಿ ಮೀಸಲಾತಿ ಪದ್ದತಿಗೆ ನಾಂದಿ ಹಾಕಿದ ಆ ಅ ಒಬ್ಬ.
೨. ಅಖಂಡ ಹಿಂದುಸ್ಥಾನ ವಿಭಜಕ, ಭಯೋತ್ಪಾದಕರ ವಾಸಸ್ಥಾನ ಪಾಕಿಸ್ತಾನದ ಜನಕ ಆ ಗಾ ಎರಡನೆಯವ. 
೩. ಅಧಿಕಾರ ದಾಹಿ, ಸ್ವಾರ್ಥಿ, ಸ್ವಜನ ಪಕ್ಷ-ಪಾತಿ, ಸ್ತ್ರೀ ಲೋಲ, ಜಾತಿ ಆಧಾರದಲ್ಲಿ ವೋಟ್ ಬ್ಯಾಂಕ್ ಕೀಳು ರಾಜಕೀಯ ಶುರು ಮಾಡಿದ ಶುದ್ದ ಅಯೋಗ್ಯ ಆ ನೆ ಮತ್ತೊಬ್ಬ.
ಇವರೆಲ್ಲರೂ ನಮ್ಮ ದೇಶದ ನಾಯಕರೆಂದೇ ನಾವು ಓದಿ ನಂಬಿ, ಇಂದಿಗೂ ಪ್ರತ್ಯೇಕ ದಿನಗಳಲ್ಲಿ ಅವರ ಜಯಂತಿ ಉತ್ಸವಗಳನ್ನು ಆಚರಿಸುತ್ತಾ ವ್ಯರ್ಥವಾಗಿ ತೆರಿಗೆದಾರರ ಹಣವನ್ನು ಪೋಲು ಮಾಡುತ್ತಾ ಕಾಲಹರಣ ಮಾದುತ್ತಿದ್ದೆವೆ. ಎಂದಿಗೆ ನಾವು ಎಚ್ಚೆತ್ತುಕೊಳ್ಳುವುದು?
[ ನಮ್ಮ ಆರಾಧ್ಯ ದೈವ ರಾಮ ಕೃಷ್ಣರ ಬಗ್ಗೆ ಅವಹೇಳನ ಮಾತುಗಳನ್ನಾಡಿ ಜೆಡ್ ಶ್ರೇಣಿ ಭದ್ರತೆಯಲ್ಲಿ ಓಡಾಡುತ್ತ ಪೋಲಿಸ್ ಕಾವಲಿನಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಿಕ್ಷೆ ಪಡೆದ ಭಗ್ 'ವಾನರ' ಎಂಬ ದೂರ್ತ ಏನು ಬೇಕಾದರೂ ಮಾತನಾಡಬಹುದು ಅದು ನನ್ನ ಅಭಿವ್ಯಕ್ತಿ ಸ್ವಾತಂತ್ರ ಅನ್ನಲ್ಲಿಲ್ಲವೇ? ಹಾಗೇನೆ ಇದುನೂ ನನ್ನ ಅನಿಸಿಕೆ. ]
  
(೨/೨) ರಾಮಲಿಂಗಾ ರೆಡ್ಡಿ ಹೇಳ್ತಾರೆ : "ಹಿಂಬದಿ ಸವಾರರಿಗೆ ಶಿರಸ್ತ್ರಾಣ ಕಡ್ಡಾಯ ಸುಪ್ರೀಂ ಕೋರ್ಟಿನ ಆದೇಶ. ಆದೇಶ ಪಾಲನೆ ಮಾಡ್ತಿದೀವಿ ಅಷ್ಟೇ". .. ರೆಡ್ಡಿ ಯವರೇ - ದಂಡ ಕಟ್ಟೋರು ಸುಪ್ರೀಂ ಕೋರ್ಟಿಗೆ ಹೋಗಿ ಕಟ್ತಾರೆ ಬಿಡಿ.. ನೀವ್ ಯಾಕೆ ವಸೂಲ್ ಮಾಡುಸ್ತಿರ ? ಮತ್ತೆ ಹೇಳಿ , ನಿಮ್ಗ್ ಎಷ್ಟ್ ಕಮಿಷನ್ ಸಿಗುತ್ತೆ ಒಂದ್ ಹೆಲ್ಮೆಟ್ ಮಾರಾಟ ಆದ್ರೆ ? ಥು .. ನಿಮ್ಮೊಕ್ಕಿಷ್ಟು .. ಬೆಂಗಳೂರಲ್ಲಿ ಇರುವುದು ರಸ್ತೇನ ಅಥವಾ ಗುಂಡಿಗಳ ಅನ್ನೋವಷ್ಟರ ಮಟ್ಟಿಗೆ ಇದೆ ಇಲ್ಲಿನ ರಸ್ತೆಗಳು.. ಅದರ ಬಗ್ಗೆ ಗಮನ ಕೊಡಿ.