Pages

Tuesday, January 7, 2014

ಜೋಚುಟುಕುಗಳು - ೫

ಬಿಜೆಪಿ-ಕೆಜೆಪಿ

ಬಿಜೆಪಿಯಲ್ಲಿ ಕೆಜೆಪಿ ವಿಲೀನ
ಮಾಡಿಸುವುದರಲ್ಲಿ ನಾಯಕರು ತಲ್ಲೀನ
ಕೇಳಿದರೆ -
ನೀವು ಮಾಡುತ್ತಿರುವುದು ಸರೀನಾ?
ಆಗುವುದಿಲ್ಲವೇ ರಾಜ್ಯ ಬಿಜೆಪಿ ಮತ್ತೆ ಮಲಿನ?
ಉತ್ತರಿಸುವರು -
ತಡೆದು ನೋಡಿ ಸ್ವಲ್ಪ ದಿನ
ಬಿಜೆಪಿ ಕಡೆ ವಾಲುವುದು ಜನರ ಮನ
ಪಂಚ್: ಹೀಗೆ ಆದ್ರೆ ರಾಜ್ಯ ಬಿಜೆಪಿ ಆಗುವುದು ಪಂಚಭೂತಗಳಲ್ಲಿ ಲೀನ!!

ಸಂಪುಟ ವಿಸ್ತರಣೆ 

ನಡೆದಿದೆ ಸದ್ದಿಲ್ಲದೇ ರಾಜ್ಯ ಸಂಪುಟದ ವಿಸ್ತರಣೆ
ಡಿಕೆಶಿಗೆ ರೋಷನ್ ಬೇಗಿಗೆ ಹಾಕಿದಾರೆ ಮಣೆ
ಸ್ವೀಕರಿಸಿದ್ದಾರೆ ಪ್ರಮಾಣ, ಮಾಡಿ ದೇವರ ಮೇಲೆ ಆಣೆ
ಡಿಕೆಶಿಗೆ ಇತ್ತೇನೋ ಸೂತಕ ನಾ ಕಾಣೆ
ಪಂಚ್:ಏನೂ ಮಾಡಲಾಗದ ಸಿದ್ದು ಚಚ್ಕೊತಿದಾರೆ ಹಣೆ !!
(ಡಿಕೆಶಿಗೆ ಪಿತೃವಿಯೋಗ ಎಂಬ ಸುದ್ದಿ ಹಿಂದಿನ ದಿನಪತ್ರಿಕೆಯಲ್ಲಿ ಬಂದಿತ್ತು! ಒಂದೋ ಸುದ್ದಿ ಸುಳ್ಳಾಗಿರಬೇಕು ಅಥವಾ ..... ನೀವೇ ಊಹಿಸಿಕೊಳ್ಳಿ! )
*******

Saturday, January 4, 2014

ಆಮ್ ಆದ್ಮಿಯ ಕೇಜ್ರೀ


ಬಯಲಾಗುತಿದೆ ಆಮ್ ಆದ್ಮಿ ಕೇಜ್ರೀ ಬಣ್ಣ
ಉಗೀರಿ ಹಾಕೊಂಡ್ ಎಲೆ ಅಡಿಕೆ ಸುಣ್ಣ

ಚುನಾವಣೆಗೂ ಮುನ್ನ 'ಕೈ' ಪಕ್ಷ ಭ್ರಷ್ಟ
ಚುನಾವಣೆ ನಂತರ 'ಕೈ'ಹಿಡಿದ ದುಷ್ಟ !

ಚುನಾವಣೆಗೂ ಮುನ್ನ 'ಶೀಲ' ಮೇಲಿಟ್ಟಿದ್ದ ಒಂದು ಅಕ್ಷಿ
ಚುನಾವಣೆ ನಂತರ ಕೇಳುವನು 'ಒದಗಿಸಿ ದಾಖಲೆ, ಸಾಕ್ಷಿ!

ಚುನಾವಣೆಗೂ ಮುನ್ನ ಸರ್ಕಾರಿ ಬಂಗಲೆ ಭದ್ರತೆಯ ನಿರಾಕರಣೆ
ಚುನಾವಣೆ ನಂತರ ಬೇಕಿವನಿಗೆ ಮನೆ, ಇರಬೇಕು ಐದು ಕೋಣೆ!

ಕುಟುಂಬವೊಂದಕ್ಕೆ ೭೦೦ ಲೀಟರ್ ನೀರು ಸಾಕೆ?
ಇದಕಾಗಿ ಅವಿಭಕ್ತ ಕುಟುಂಬ ಬಿಡಿಯಾಗಬೇಕೆ ?
ಅಥವಾ 'ಒಂದೇ' ಮನೆಗೆ ಹತ್ತಾರು ಮೀಟರ್ ಅಳವಡಿಸಿಕೊಳ್ಳಬೇಕೇ?!

ಶೇಕಡ ೫೦ರಷ್ಟು ಕಡಿತ ವಿದ್ಯುತ್ ದರದಲಿ
ಕಮಾಲೇನು ನಡೆಸಿಲ್ಲ, ಜನ ಅರ್ಥ ಮಾಡಿಕೊಳ್ಳಲಿ
ಎಷ್ಟೋ ವರ್ಷದಿಂದಿದೆ ಇನ್ನು ಕಡಿಮೆ ದರ ಗೋವಾ ರಾಜ್ಯದಲಿ !

ಬಯಲಾಗುತಿದೆ ಆಮ್ ಆದ್ಮಿ ಕೇಜ್ರೀ ಬಣ್ಣ
ಉಗೀರಿ ಹಾಕೊಂಡ್ ಎಲೆ ಅಡಿಕೆ ಸುಣ್ಣ

ಪಂಚ್: ಕಾಂಗ್ರೆಸಿನ ಕುತಂತ್ರ ರಾಜಕೀಯಕ್ಕೆ ಸಾಕ್ಷಿ, ಆಮ್ ಆದ್ಮಿ ಪಕ್ಷ
ನಡೆಯೋಲ್ಲ ಇವರ ಆಟ ಕಳೆದರೆ ಹತ್ತು ಪಕ್ಷ (೧೦ ಪಕ್ಷ = ೫ ತಿಂಗಳು)
ಚುನಾಯಿಸಿ ನೀವು ಭಾರತೀಯ ಜನತಾ ಪಕ್ಷ !
*******

Friday, January 3, 2014

ನನ್ನ ಪ್ರಚಲಿತ!


ಸಾಕಾಗಿದೆ ಕಾದು ಕಾದು
ಮನೆಯಲ್ಲಿ ಕೂತು ಕೂತು

ಕೆಲಸವಿಲ್ಲ ಕಾರ್ಯವಿಲ್ಲ
ಹೊರ ಹೋಗಲು ಮನಸಿಲ್ಲ
ದಿನಪತ್ರಿಕೆ ಓದೋದು ಮುಗಿಯಲ್ಲ
ಟೀವಿ ನೋಡೋದು ನಿಲ್ಲಲ್ಲ

ಊಟಕ್ಕೇನು ಚಿಂತೆ ಇಲ್ಲ
ನಿದ್ದೇಗೇನೂ ಬರ ಇಲ್ಲ
ಕಾಫಿಗಂತೂ ತಕರಾರ್ ಇಲ್ಲ
ಚಾಟ್ಸ್ ಗಳು ಏನ್ ಕಮ್ಮಿ ಇಲ್ಲ

ಪೂಜೆ ಇಲ್ಲ ಪುರಸ್ಕಾರ ಇಲ್ಲ
ದೇವರಿಲ್ಲ ಬ್ರಾಹ್ಮಣರಿಲ್ಲ
ಮಠ ಮಾನ್ಯದ್ ದಿಕ್ಕು ತೋಚ್ತಿಲ್ಲ
ಯಾಕೋ ಜೀವನ ಹಿಂಗಾಯ್ತಲ್ಲ

ಮಾತು ಬೇಡ ಕಥೆಯೂ ಬೇಡ
ಮೊಬೈಲು ಜಾಸ್ತಿ ನೋಡುದು ಬೇಡ
ಹೊರಜಗತ್ತಿನ ಅರಿವು ಬೇಡ
ದಿನದಿಂದ ದಿನಕ್ಕೆ ಆಗು ಮೂಢ

ಅನಿಸಿಕೆಗಳಿಗೆ ಬೆಲೆ ಇಲ್ಲ
ವಿಚಾರಗಳಂತೂ ತಿಳಿದೇ ಇಲ್ಲ
ಆಂಗ್ಲವಂತೂ ಬರೋದೇ ಇಲ್ಲ
ಹೇಳಿದ್ ಯಾವ್ದು ನೆನಪೇ ಇರೋಲ್ಲ

ಮಾತಾಡಿದರೆ ನೂರು ತಪ್ಪು
ಆಡದಿದ್ದರೆ ಒಂದೇ ತಪ್ಪು
ಹೇಳಿದ್ದೆಲ್ಲಾ ನೀನು ಒಪ್ಪು
ಇಲ್ದೆ ಇದ್ರೆ ಆಗು ಬೆಪ್ಪು

ಹೇಳುವುದನ್ನು ಸರಿಯಾಗಿ ಕಲುತ್ಕೊ
ಕೇಳಿದ್ದನ್ನು ಸರಿಯಾಗಿ ತಿಳುದ್ಕೊ
ಮಾಡುವುದನ್ನು ಎಲ್ರಿಗೂ ಹೇಳ್ಕೋ
ಮನ್ಸಿನ್ ಮಾತು ಒಳಗೇ ಇಟ್ಕೋ

ಬಿಟ್ಟುಬಿಡು ಎಲ್ಲಾ ಹಠ
ಇಟ್ಕೋಬೇಡ ಯಾವುದೇ ಚಟ
ಕೆಲ್ಸಾ ಮಾಡು ಪಟ ಪಟ
ಅದೇ ಜೀವನದ ಪಾಠ

ಸಾಕಾಗಿದೆ ಕಾದು ಕಾದು
ಮನೆಯಲ್ಲಿ ಕೂತು ಕೂತು