Pages

Saturday, January 4, 2014

ಆಮ್ ಆದ್ಮಿಯ ಕೇಜ್ರೀ


ಬಯಲಾಗುತಿದೆ ಆಮ್ ಆದ್ಮಿ ಕೇಜ್ರೀ ಬಣ್ಣ
ಉಗೀರಿ ಹಾಕೊಂಡ್ ಎಲೆ ಅಡಿಕೆ ಸುಣ್ಣ

ಚುನಾವಣೆಗೂ ಮುನ್ನ 'ಕೈ' ಪಕ್ಷ ಭ್ರಷ್ಟ
ಚುನಾವಣೆ ನಂತರ 'ಕೈ'ಹಿಡಿದ ದುಷ್ಟ !

ಚುನಾವಣೆಗೂ ಮುನ್ನ 'ಶೀಲ' ಮೇಲಿಟ್ಟಿದ್ದ ಒಂದು ಅಕ್ಷಿ
ಚುನಾವಣೆ ನಂತರ ಕೇಳುವನು 'ಒದಗಿಸಿ ದಾಖಲೆ, ಸಾಕ್ಷಿ!

ಚುನಾವಣೆಗೂ ಮುನ್ನ ಸರ್ಕಾರಿ ಬಂಗಲೆ ಭದ್ರತೆಯ ನಿರಾಕರಣೆ
ಚುನಾವಣೆ ನಂತರ ಬೇಕಿವನಿಗೆ ಮನೆ, ಇರಬೇಕು ಐದು ಕೋಣೆ!

ಕುಟುಂಬವೊಂದಕ್ಕೆ ೭೦೦ ಲೀಟರ್ ನೀರು ಸಾಕೆ?
ಇದಕಾಗಿ ಅವಿಭಕ್ತ ಕುಟುಂಬ ಬಿಡಿಯಾಗಬೇಕೆ ?
ಅಥವಾ 'ಒಂದೇ' ಮನೆಗೆ ಹತ್ತಾರು ಮೀಟರ್ ಅಳವಡಿಸಿಕೊಳ್ಳಬೇಕೇ?!

ಶೇಕಡ ೫೦ರಷ್ಟು ಕಡಿತ ವಿದ್ಯುತ್ ದರದಲಿ
ಕಮಾಲೇನು ನಡೆಸಿಲ್ಲ, ಜನ ಅರ್ಥ ಮಾಡಿಕೊಳ್ಳಲಿ
ಎಷ್ಟೋ ವರ್ಷದಿಂದಿದೆ ಇನ್ನು ಕಡಿಮೆ ದರ ಗೋವಾ ರಾಜ್ಯದಲಿ !

ಬಯಲಾಗುತಿದೆ ಆಮ್ ಆದ್ಮಿ ಕೇಜ್ರೀ ಬಣ್ಣ
ಉಗೀರಿ ಹಾಕೊಂಡ್ ಎಲೆ ಅಡಿಕೆ ಸುಣ್ಣ

ಪಂಚ್: ಕಾಂಗ್ರೆಸಿನ ಕುತಂತ್ರ ರಾಜಕೀಯಕ್ಕೆ ಸಾಕ್ಷಿ, ಆಮ್ ಆದ್ಮಿ ಪಕ್ಷ
ನಡೆಯೋಲ್ಲ ಇವರ ಆಟ ಕಳೆದರೆ ಹತ್ತು ಪಕ್ಷ (೧೦ ಪಕ್ಷ = ೫ ತಿಂಗಳು)
ಚುನಾಯಿಸಿ ನೀವು ಭಾರತೀಯ ಜನತಾ ಪಕ್ಷ !
*******

1 comment: