Pages

Thursday, June 13, 2013

ಆಡ್ವಾಣಿ - ಬಿಸ್ಕತ್ತು :P


ಆಡ್ವಾಣಿಗೆ ಆಗಿತ್ತು ಬಿಜೆಪಿಯೇ ಇಡೀ ಜಗತ್ತು
ಲೋಕಸಭೆ ಸೀಟಿನ ಸಂಖ್ಯೆಯಲ್ಲಿ ಬಿಜೆಪಿ ತಲುಪಿತ್ತು  -
ಅವರ ಕಾಲದಲ್ಲಿ ಎರಡರಿಂದ ನೂರೆಂಬತ್ತು
ಅಂಥ  ಆಡ್ವಾಣಿಗೆ ಬಿಜೆಪಿಯಲ್ಲಿ ಇರಲ್ಲಿಲ್ಲ ಕಿಮ್ಮತ್ತು
ಅದಕ್ಕೆ ತಪ್ಪಿಸಿದರು ರಾಷ್ಟ್ರೀಯ ಕಾರ್ಯಕಾರಿಣಿ ಅಂತ ಎಲ್ಲರಿಗೂ ಗೊತ್ತು

ಇದೆ ಸಮಯದಲ್ಲಿ:
ರಾಜನಾಥ್ ಹಾಕಿದರು ಪ್ರಚಾರ ಸಮಿತಿ ಅಧ್ಯಕ್ಷ ಹುದ್ದೆಗೆ ಏಣಿ ಮತ್ತು -
ನರೇಂದ್ರ ಮೋದಿಗೆ ಹೇಳಿದರು, ಇದ ನೀ ಹತ್ತು
ಕುರ್ಚಿ ಸಿಕ್ಕಿದ್ದಕ್ಕೆ ಅಭಿಮಾನಿಗಳಿಗೆ ಮೋದಿ ಕೊಟ್ಟರು ಸಿಹಿ ಮುತ್ತು ( Plain Kiss :P )

ಆಡ್ವಾಣಿ ತಿಳಿದರು :
ಇನ್ಮುಂದೆ ನಡೆಯುತ್ತೆ ಬರೀ ಮೋದಿಯದೆ ಗಮ್ಮತ್ತು
ಹಾಗಾಗಿ ಪಕ್ಷದ ಹುದ್ದೆಗಳಿಗೆ ಕೊಟ್ಟಿದ್ದರು ರಾಜಿನಾಮೆ ಬೇಸತ್ತು
ಬ್ಲಾಗಿದರು, ಬಿಜೆಪಿಯಲ್ಲಿ ನನಗಾಗುತ್ತಿದೆ ಹಿಸುಕಿದ ಹಾಗೆ ಕತ್ತು

ಮೀಡಿಯ ಅಂದಿತು :
ಆಡ್ವಾಣಿ ಇಲ್ಲದ ಬಿಜೆಪಿ ಇದ್ದರೂ, ಅದು ಹೋದ ಸತ್ತು
ಲೋಕಸಭೆ ಚುನಾವಣೆಲಿ ಬಿಜೆಪಿಗೆ ಕಾದಿದೆ ಭಾರಿ ಆಪತ್ತು
ಜಾತ್ಯಾತೀತರಿಗೆ ಇಲ್ಲವೇ ಇಲ್ಲ ಯಾವುದೇ ವಿಪತ್ತು

ಹೀಗಿರುವಾಗಲೇ :
ಮಮತಾರ ತೃತೀಯ ರಂಗದ ಕನಸು ಚಿಗುರಿತ್ತು
ಫೆಡರಲ್ ಅಲಯನ್ಸ್ ನ ಕೂಗು ಮತ್ತೆ ಎದ್ದಿತ್ತು
ಕಾಂಗ್ರೇಸ್ ಅಂದಿತು ನಾವಾಗೋಲ್ಲ ತೃತೀಯ ರಂಗಕ್ಕೆ ಸುಲಭದ ತುತ್ತು
ಮುಲಾಯಂ ಅಸಹಕಾರದಿಂದ ತೃತೀಯ ರಂಗ ಮುರಿದುಬಿತ್ತು

ಅದೇ ಸಮಯದಲ್ಲಿ:
ಆಡ್ವಾಣಿಯವರನ್ನು ವಾಪಸ್ ತರಲು ಮಾಡಿದ್ದ ತಂತ್ರ ಫಲಿಸಿತ್ತು
ಮೋಹನ್ ಭಾಗವತ್ ರ ಒಂದೇ ಕರೆ ಮಾಡಿತು ಕರಾಮತ್ತು

ಇರಬಹುದೇನೋ ಇದು :
ಮೂಲೆಗುಂಪಾಗಿದ್ದ ಆಡ್ವಾಣಿ ಪ್ರಚಾರ ಗಿಟ್ಟಿಸಲು ಬೇಕಂತಲೇ ಹಾಕಿದ ಬಿಸ್ಕತ್ತು !!