Pages

Tuesday, January 7, 2014

ಜೋಚುಟುಕುಗಳು - ೫

ಬಿಜೆಪಿ-ಕೆಜೆಪಿ

ಬಿಜೆಪಿಯಲ್ಲಿ ಕೆಜೆಪಿ ವಿಲೀನ
ಮಾಡಿಸುವುದರಲ್ಲಿ ನಾಯಕರು ತಲ್ಲೀನ
ಕೇಳಿದರೆ -
ನೀವು ಮಾಡುತ್ತಿರುವುದು ಸರೀನಾ?
ಆಗುವುದಿಲ್ಲವೇ ರಾಜ್ಯ ಬಿಜೆಪಿ ಮತ್ತೆ ಮಲಿನ?
ಉತ್ತರಿಸುವರು -
ತಡೆದು ನೋಡಿ ಸ್ವಲ್ಪ ದಿನ
ಬಿಜೆಪಿ ಕಡೆ ವಾಲುವುದು ಜನರ ಮನ
ಪಂಚ್: ಹೀಗೆ ಆದ್ರೆ ರಾಜ್ಯ ಬಿಜೆಪಿ ಆಗುವುದು ಪಂಚಭೂತಗಳಲ್ಲಿ ಲೀನ!!

ಸಂಪುಟ ವಿಸ್ತರಣೆ 

ನಡೆದಿದೆ ಸದ್ದಿಲ್ಲದೇ ರಾಜ್ಯ ಸಂಪುಟದ ವಿಸ್ತರಣೆ
ಡಿಕೆಶಿಗೆ ರೋಷನ್ ಬೇಗಿಗೆ ಹಾಕಿದಾರೆ ಮಣೆ
ಸ್ವೀಕರಿಸಿದ್ದಾರೆ ಪ್ರಮಾಣ, ಮಾಡಿ ದೇವರ ಮೇಲೆ ಆಣೆ
ಡಿಕೆಶಿಗೆ ಇತ್ತೇನೋ ಸೂತಕ ನಾ ಕಾಣೆ
ಪಂಚ್:ಏನೂ ಮಾಡಲಾಗದ ಸಿದ್ದು ಚಚ್ಕೊತಿದಾರೆ ಹಣೆ !!
(ಡಿಕೆಶಿಗೆ ಪಿತೃವಿಯೋಗ ಎಂಬ ಸುದ್ದಿ ಹಿಂದಿನ ದಿನಪತ್ರಿಕೆಯಲ್ಲಿ ಬಂದಿತ್ತು! ಒಂದೋ ಸುದ್ದಿ ಸುಳ್ಳಾಗಿರಬೇಕು ಅಥವಾ ..... ನೀವೇ ಊಹಿಸಿಕೊಳ್ಳಿ! )
*******

No comments:

Post a Comment