Pages

Wednesday, January 11, 2012

ಅಂತೆ ಕಂತೆ

ನಿಡುಮಾಮಿಡಿಗೆ ಮಡೆ ಮಡೆ ಸ್ನಾನದ ಚಿಂತೆ
ಎನ್. ಟಿ. ಪಿ. ಪಿ ಸಲುವಾಗಿ ಪೇಜಾವರರ ನಿರಶನವಂತೆ
ಬಿ.ಎಸ್. ವೈ ಗೆ ಮುಖ್ಯ ಮಂತ್ರಿ ಸ್ಥಾನ ಬೇಕಂತೆ
ಲೋಕಾಯುಕ್ತರಿಗೆ ಸಿಕ್ಕಿ ಬೀಳುತ್ತಿದೆ ನೋಟಿನ ಕಂತೆ ಕಂತೆ
ಉತ್ತರ ಕರ್ನಾಟಕದ ಪ್ರವಾಹ ಪೀಡಿತರಿಗೆ ಇನ್ನೂ ಮನೆ ಸಿಕ್ಕಿಲ್ಲವಂತೆ
ರೈತ ಸಂಘ ಒಳ ಜಗಳದಿಂದ ಇಬ್ಬಾಗವಾಗುವುದಂತೆ
ಸುದ್ದಿವಾಹಿನಿಗಳಲ್ಲಿ ಇಂತದ್ದೇ ಸುದ್ದಿ, ಬರೆ ಅಂತೆ ಕಂತೆ
ದಿನಪತ್ರಿಕೆಗಳೂ ಇಂತದ್ದೇ ಸುದ್ದಿ ಹೊತ್ತುತಂತೆ?

No comments:

Post a Comment